ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.

ಲಕ್ನೋ: ರಾಮ ಜನಮಭೂಮಿ ಆವರಣದಲ್ಲಿ ಭಗವಾನ್ ರಾಮ ಮಂದಿರದ ನಿರ್ಮಾಣಕ್ಕೆ ‘ಭೂಮಿ ಪೂಜೆಗೆ’ ಸಿದ್ಧತೆಗಳನ್ನು ಪರಿಶೀಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ (ಜುಲೈ 25) ಅಯೋಧ್ಯೆಗೆ ಆಗಮಿಸಿದ್ದಾರೆ.

ರಾಮ ಜನ್ಮಭೂಮಿ ಸ್ಥಳದಲ್ಲಿ ಮುಖ್ಯಮಂತ್ರಿ ರಾಮನಿಗೆ ಪ್ರಾರ್ಥನೆ ಸಲ್ಲಿಸಿದರು. ವರದಿಗಳ ಪ್ರಕಾರ, ಅವರು ಇಂದು ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಅವರನ್ನು ಹೊಸ ‘ಆಸನ’ಗಳಲ್ಲಿ ರಾಮ ಜನ್ಮ ಭೂಮಿಯಲ್ಲಿ ಇಡಲಿದ್ದಾರೆ.

ಸಿಎಂ ಯೋಗಿ ಅವರು ಶ್ರೀ ರಾಮ ಜನ್ಮ ಭೂಮಿಯ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಸ್ಥಳೀಯ ಆಡಳಿತದ ಸದಸ್ಯರೊಂದಿಗೆ ಸಭೆ ನಡೆಸಿದರು. ಹನುಮಾನ್ ಗರ್ಹಿಯಲ್ಲಿ ಹನುಮನಿಗೆ ಪ್ರಾರ್ಥನೆ ಸಲ್ಲಿಸಿದರು.